ದ್ವಿತೀಯ ಪಿ.ಯು.ಸಿ. ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್‌ | 2 PUC Urilingapeddiya Vachanagalu Kannada Notes. ಉರಿಲಿಂಗಪೆದ್ದಿ ವಚನಗಳು Notes ತರಗತಿ : ದ್ವಿತೀಯ ಪಿ.ಯು.ಸಿ.

 ದ್ವಿತೀಯ ಪಿ.ಯು.ಸಿ. ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್‌ | 2 PUC Urilingapeddiya Vachanagalu Kannada Notes.

ಉರಿಲಿಂಗಪೆದ್ದಿ ವಚನಗಳು Notes

ತರಗತಿ : ದ್ವಿತೀಯ ಪಿ.ಯು.ಸಿ.


ಪದ್ಯದ ಹೆಸರು : ವಚನಗಳು (ಉರಿಲಿಂಗಪೆದ್ದಿಯ ವಚನಗಳು)


ಕೃತಿಕಾರರ ಹೆಸರು : ಉರಿಲಿಂಗಪೆ


ಕವಿ ಪರಿಚಯ :

“ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ” ಎಂಬ ಅಂಕಿತದಲ್ಲಿ ಉರಿಲಿಂಗಪೆದ್ದಿಯ 366 ವಚನಗಳು ಇದುವರೆಗೂ ದೊರೆತಿವೆ . ಈತ ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಿದ್ದ , ತಂದೆ – ತಾಯಿಗಳು ಇವನಿಗೆ ಪೆದ್ದಣ್ಣ ಎಂಬ ಹೆಸರಿಟ್ಟರು . ಕಳ್ಳತನ ಮಾಡಿಕೊಂಡು ಜೀವಿಸುತ್ತಿದ್ದ . ಈತ ಒಮ್ಮೆ ಉರಿಲಿಂಗದೇವರ ಮನೆಗೆ ಕನ್ನ ಹಾಕಿದ . ಆಗ ಉರಿಲಿಂಗದೇವರು ನಂದವಾಡ ಗ್ರಾಮದ ಸೂರಯ್ಯನಿಗೆ ದೀಕ್ಷೆ ನೀಡುತ್ತಿದ್ದರು . ಇದನ್ನು ಕಂಡು ಮನಃ ಪರಿವರ್ತನೆ ಹೊಂದಿದ ಪೆದ್ದಣ್ಣ ದಿನವೂ ಉರಿಲಿಂಗಪೆದ್ದಿಗಳ ಮಠಕ್ಕೆ ಒಂದು ಹೊರೆ ಸೌದೆ ತಂದು ಹಾಕುತ್ತಿದ್ದ . ಕೊನೆಗೊಂದು ದಿನ ಗುರುವನ್ನು ಕಾಡಿ ಬೇಡಿ ದೀಕ್ಷೆಯನ್ನು ಪಡೆದು ‘ ಉರಿಲಿಂಗಪೆದ್ದಿ ‘ ಎಂಬ ಹೆಸರನ್ನು ಧರಿಸಿ ಗುರುವಿಗೆ ತಕ್ಕ ಶಿಷ್ಯನಾದನು . ಗುರುವಿನ ನಂತರ ಸಕಲಶಾಸ್ತ್ರ ಪಾರಂಗತನಾಗಿ ತಾನೇ ಆ ಪೀಠಕ್ಕೆ ಒಡೆಯನಾದ ಮಹಾನುಭವಿ ಈತ .

ಚಿಂತೆಯಿಲ್ಲದ ಅತಿಶ್ರೇಷ್ಠನಾದ ಮನಸ್ಥಿತಿಯನ್ನು ಶಿವಧ್ಯಾನದಿಂದ ಸಾಧಿಸ ಬಹುದೆಂಬುದನ್ನು ಮಂಗಳಕರವಾದ ಅಂಗದ ಸಾಂಗತ್ಯವುಳ್ಳವನೆಂದೂ ಬೇರೆಯವರ ಬಗ್ಗೆ ಚಿಂತಿಸನೆಂಬುದನ್ನು ಗುರುವಿನ ನಡತೆಯು ಘನತೆಯುಳ್ಳದಾಗಿರ ಬೇಕೆಂಬುದನ್ನು ಉರಿಲಿಂಗಪೆದ್ದಿಯ ವಚನಗಳು ನಿರೂಪಿಸುತ್ತವೆ . ತನ್ನ ವಿಚಾರಗಳನ್ನು ಮಂಡಿಸುವಾಗ ಬಳಸುವ ಹೋಲಿಕೆಗಳ ಔಚಿತ್ಯವನ್ನು ವಚನ ಬಂಧುರದಲ್ಲಿ ಹಿಡಿದಿರುವ ಕುಶಲತೆ , ಕಲೆಗಾರಿಕೆಗಳಿಂದಾಗಿ ಈ ವಚನಗಳು ಗಮನಾರ್ಹವೆನಿಸಿವೆ .

ಪದಗಳ ಅರ್ಥ:

ಸಕಲ-ಸಮಗ್ರವಾದುದು . ಪರಿಪೂರ್ಣವುಳ್ಳದ್ದು ( ಸಕಲತತ್ತ್ವವೆಂದರೆ ಪರಶಿವನ ಸ್ವರೂಪವೇ ಆಗಿದೆ . ಸಕಲ – ನಿಷ್ಕಲವೆಂಬವು ವಚನಕಾರರ ಆಕಾರ ಮತ್ತು ನಿರಾಕಾರ ಸ್ವರೂಪವನ್ನು ಕುರಿತ ಜಿಜ್ಞಾಸೆಯಾಗಿದೆ ) ; ನಿಷ್ಕಲ – ನಿರಾಕಾರವಾದ , ಅಖಂಡವಾದ , ಕಲಾರಹಿತವಾದ ( ನಿರಾಕಾರ ಸ್ವರೂಪವಾದ ಪರವಸ್ತು , ಶಿವಲಿಂಗ ) : ಮಹಾಘನ – ಅತಿಶ್ರೇಷ್ಠವಾದ , ಉನ್ನತವಾದ. ನಿರಾಳ – ಚಿಂತೆಯಿಲ್ಲದ , ಪರುಷ – ಮುಟ್ಟಿದ್ದನ್ನು ಚಿನ್ನವಾಗಿಸುವ ( ಮಣಿ ) ಶಿಲೆ ; ಗೃಹ – ಮನೆ ; ತಿರಿ – ಬೇಡು ; ತೊರೆ – ನದಿ ; ತೃಷೆ – ಬಾಯಾರಿಕೆ ; ಉದಕ – ನೀರು ; ಲಘು – ಸಣ್ಣದು ; ಗುರು – ದೊಡ್ಡದು , ಬೋಧಕ .

2nd Puc Urilingapeddiya Vachanagalu Question Answer

ಆ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ಯಾವುದರಿಂದ ಪರಿಮಳವನ್ನು ಅರಿಯಬಹುದು ?

ಹೂವಿನಿಂದ ಪರಿಮಳವನ್ನು ಅರಿಯಬಹುದು .

2) ಗುರು ಹೇಗೆ ವರ್ತಿಸಬಾರದು ?

ಗುರು ಲಘುವಾಗಿ ವರ್ತಿಸಬಾರದು .

3 ) ಯಾರು ಅನ್ಯಲಿಂಗವನ್ನು ನೆನೆಯುವುದಿಲ್ಲ ?

ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾನ ಭಕ್ತನಾದವನು ಅನ್ನಲಿಂಗವನ್ನು ನೆನೆಯುವುದಿಲ್ಲ .

4 ) ಉರಿಲಿಂಗಪೆದ್ದಿಯ ವಚನಗಳ ಅಂಕಿತ ಯಾವುದು ?

ಉರಿಲಿಂಗಪೆದ್ದಿಯ ವಚನಗಳ ಅಂಕಿತ ‘ ಉರಿಲಿಂಗಪೆದ್ದಿಯ ವಿಶ್ವೇಶ್ವರಾ ‘ ಎಂಬುದು .

ಇ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

1 ) ಗುರುವಿನ ಲಕ್ಷಣಗಳೇನು ?

ಗುರು ಶ್ರೀಗುರುವಾಗಿದ್ದಾನೆ . ಆತನ ಆಚಾರ – ವಿಚಾರ , ನಡೆ – ನುಡಿ ಎಲ್ಲವೂ ಗುರುತರವಾಗಿರುತ್ತದೆ . ಶ್ರೇಷ್ಠತರವಾಗಿರುತ್ತದೆ . ಆತ ಎಂದು ಶ್ರೀಗುರುವಾಗಿಯೇ ಉಳಿಯುವನೇ ಹೊರತು ಲಘುವಾಗಿ ನಡೆದುಕೊಳ್ಳಲು . ಗುರು ಗುರುವಾಗಿ ಶ್ರೇಷ್ಠನಾಗಿರುವನು . ಬೋಧಕನಾಗಿ , ಮಾರ್ಗದರ್ಶಕನಾಗಿ ಇರುವನು .

2 ) ಯಾರು ಮನೆಮನೆಯನ್ನು ತಿರಿಯನು ? ಕೆರೆಯುದಕವನ್ನರಸದವನು ಯಾರು ?

ಸ್ಪರ್ಶ ಮಣಿಯಿಂದ ( ಪರುಷ ಮಣಿಯಿಂದ ) ನಿರ್ಮಿಸಿದ ಮನೆಯಲ್ಲಿ ವಾಸಿಸುವವನು ಅಂದರೆ ಶ್ರೀಮಂತನು ಮನೆಮನೆಗೆ ಹೋಗಿ ಭಿಕ್ಷೆ ಬೇಡನು . ತೊರೆಯೊಳಗಿದ್ದವನು ( ನದಿಯ ಬಳಿ ಇರುವವನು ) ಬಾಯಾರಿಕೆಯನ್ನಾರಿಸಿಕೊಳ್ಳಲು ಕೆರೆಯ ನೀರನ್ನು ಬಯಸುವುದಿಲ್ಲ .

3 ) ಸೂರ್ಯ ಮತ್ತು ದೀಪಗಳಿಂದಾಗುವ ಉಪಯೋಗಗಳಾವುವು ?

ಸೂರ್ಯನಿಲ್ಲದೆ ಹಗಲು ಇರುವುದಿಲ್ಲ , ದೀಪವಿಲ್ಲದೆ ಬೆಳಕು ಇರುವುದಿಲ್ಲ , ಅಂದರೆ ಸೂರ್ಯನಿಂದ ನಮಗೆ ಬೆಳಕು ಹಗಲು ಹಾಗೂ ದೀಪದಿಂದ ಬೆಳಕು ರಾತ್ರಿ ದೊರೆಯುತ್ತದೆ . 

ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

1 ) ಉರಿಲಿಂಗಪೆದ್ದಿಯ ವಚನಗಳಲ್ಲಿನ ಆಶಯವೇನು ?


ಅತಿ ಶ್ರೇಷ್ಠವಾದ ಮನಸ್ಥಿತಿಯಿಂದ ಶಿವಧ್ಯಾನ ಮಾಡುತ್ತಾ ಮಂಗಳಕರವಾದ ಅಂಗಳದ ಸಾಂಗತ್ಯದಿಂದ ಇತರರ ಬಗ್ಗೆ ಚಿಂತಿಸಬೇಕೆಂಬುದನ್ನು ಉರಿಲಿಂಗಪೆದ್ದಿಯ ವಚನಗಳಲ್ಲಿನ ಆಶಯವಾಗಿದೆ . ಅಲ್ಲದೆ ಗುರುವಿನ ನಡತೆಯು ಗುರುತರವಾಗಿದ್ದು , ಘನತೆಯುಳ್ಳದ್ದಾಗಿಯೂ ಇರಬೇಕೆಂಬುದನ್ನು ಅದರ ಔಚಿತ್ಯವನ್ನು ಹಲವಾರು ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸುವುದೇ ಉರಿಲಿಂಗಪೆದ್ದಿಯ ವಚನಗಳ ಆಶಯವಾಗಿದೆ .


2 ) ಮಂಗಳಲಿಂಗದ ಮಹತ್ವವನ್ನು ಹೇಗೆ ವಿವರಿಸಲಾಗಿದೆ ?


ಮಂಗಳಲಿಂಗವು ಅತ್ಯಂತ ಮಹತ್ವ ಪೂರ್ಣವಾದುದಾಗಿದೆ . ಏಕೆಂದರೆ ಮಂಗಳಲಿಂಗದಂಗಳದಲ್ಲಿಯೇ ಇಡೀ ಜಗತ್ತು ಅಡಗಿದೆ . ಈ ಮಂಗಳಲಿಂಗದಂಗಳವು ಪರುಷದ ಗೃಹದಂತೆ , ಇಡೀ ಜಗತ್ತಿನ ಕೃಷಿಯನ್ನರಿಸುವ ತೊರೆಯಂತಿರುವವನು . ಆದ್ದರಿಂದಲೇ ಮಂಗಳಲಿಂಗ ಅಂಗಳವಿರಲು ಅನ್ಯಲಿಂಗಗಳನ್ನು ಭಕ್ತನು ನೆನೆವನೆ ? ಅಂದರೆ ಅಷ್ಟೊಂದು ಮಹತ್ವಪೂರ್ಣದ್ದಾಗಿದೆ .


3 ) ಗುರು ಲಘುವರ್ತನದಲ್ಲಿ ವರ್ತಿಸಬಾರದೇಕೆ ?


ಗುರು ಶ್ರೇಷ್ಠತಮ , ಬೋಧಕ , ಮಾರ್ಗದರ್ಶಕ , ಗುರುತರ ಮಾತ್ರವಲ್ಲದೆ ಶ್ರೀಗುರುವೇ ಆಗಿರುವನು . ಆತನ ಆಚಾರ – ವಿಚಾರ , ವರ್ತನೆ ಎಲ್ಲದರಲ್ಲಿಯೂ ಗುರುವಾಗಿಯೇ ಇರಬೇಕು . ಲಘುತರನಾಗಿ ವರ್ತಿಸಿದರೆ ಆ ಶ್ರೀಗುರುವಿಗೆ ಅಪಮಾನಕರ , ಯಾರು ಗೌರವ ಕೊಡಲಾರರು , ಗುರುಸ್ಥಾನಕ್ಕೆ ಚ್ಯುತಿ ಬರುವುದು . ಆದ್ದರಿಂದ ಗುರು ಗುರುವಾಗಿಯೇ ಇರಬೇಕೆ ಹೊರತು ಲಘುತರನಾಗಿ ವರ್ತಿಸಬಾರದು .


೨.೧೧ ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1 “ ತಾನೆ ಲಘುಮಾಡಿ ಲಘುವಾದನಯ್ಯ ”


ಈ ಮೇಲಿನ ವಾಕ್ಯವನ್ನು ಉರಿಲಿಂಗಪೆದ್ದಿಯ ವಚನದಿಂದ ಆಯ್ದುಕೊಳ್ಳ ಲಾಗಿದೆ . ಗುರುವು ಲಘುವಾದ ರೀತಿಯಲ್ಲಿ ವರ್ತಿಸಬಾರದೆಂಬುದನ್ನು ನಿರೂಪಿಸುವಾಗ ಕವಿಯು ಈ ವಾಕ್ಯವನ್ನಾಡಿದ್ದಾನೆ . ಗುರುವಿನ ಸ್ಥಾನ ಹಿರಿದು . ತನ್ನ ಸಚ್ಚಾರಿತ್ರ್ಯ ವರ್ತನೆ ಮತ್ತು ವ್ಯಕ್ತಿತ್ವಗಳಿಂದ ಆತ ಸದಾ ತನ್ನ ಗುರುಸ್ಥಾನದ ಘನತೆಯನ್ನು ಕಾಯ್ದುಕೊಳ್ಳಬೇಕು . ಆ ಮೂಲಕ ತನ್ನ ಶಿಷ್ಯರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು . ಗುರುವು ಲಘುವರ್ತನೆಯನ್ನು ತೋರಿದರೆ ಅವನು ಉಳಿದವರ ದೃಷ್ಟಿಯಲ್ಲಿ ಲಘುವಾಗಿ ಹೋಗುತ್ತಾನೆ . ಆದ್ದರಿಂದ ಹಗುರವಾದ ನಡವಳಿಕೆಯನ್ನು ತೋರದೆ ಘನವ್ಯಕ್ತಿತ್ವವನ್ನು ಕಾಯ್ದುಕೊಳ್ಳುವುದು ನಿಜವಾದ ಗುರುವಾದವನ ಕರ್ತವ್ಯವಾಗಿದೆ ಎಂಬುದನ್ನು ಕವಿಯು ಇಲ್ಲಿ ವಿವರಿಸಿ ಹೇಳಿದ್ದಾನೆ .


2. “ ಅನ್ಯ ಲಿಂಗಗಳ ನೆನೆವನೆ ನಿಮ್ಮ ಭಕ್ತನು ”


ಈ ಮೇಲಿನ ವಾಕ್ಯವನ್ನು ಉರಿಲಿಂಗಪೆದ್ದಿಯ ವಚನದಿಂದ ಆಯ್ದುಕೊಳ್ಳ ಲಾಗಿದೆ . ಲಿಂಗಸಾಮಿಪ್ಯವು ಉಳಿದೆಲ್ಲವನ್ನೂ ಮರೆಯುವಂತೆ , ನೆನೆಯದಂತೆ ಮಾಡುವು ದೆಂಬುದನ್ನು ನಿರೂಪಿಸುವಾಗ ಕವಿ ಈ ಮೇಲಿನ ಮಾತನ್ನು ಹೇಳಿದ್ದಾನೆ . ಪರುಷಗೃಹದಲ್ಲಿರುವವನು ಮನೆಮನೆ ತಿರುಗಿ ತಿರಿಯುವ ( ಬೇಡುವ ) ಅಗತ್ಯವಿಲ್ಲ , ತೊರೆಯೊಳಗಿರುವವನು ಕೆರೆಯ ನೀರನ್ನು ಬಯಸನು . ಅದರಂತೆಯೇ ಮೈಮೇಲೆ ಲಿಂಗವನ್ನು ಧರಿಸಿದ ಮಹಾಭಕ್ತನು ಅನ್ಯಲಿಂಗಗಳನ್ನು ನೆನೆಯುವುದಿಲ್ಲ ಎಂದು ಉರಿಲಿಂಗಪೆದ್ದಿಯು ಅಭಿಪ್ರಾಯಪಟ್ಟಿರುವನು .


3 “ ಪುಷ್ಟವಿಲ್ಲದೆ ಪರಿಮಳವನರಿಯಬಹುದೆ “


ಉರಿಲಿಂಗಪೆದ್ದಿಯ ವಚನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಮಹಾಘನ ನಿರಾಳನಾದ ಪರಶಿವನಿಂದ ಲಿಂಗವು ವೇದ್ಯವಾಗುವುದೆನ್ನುವುದನ್ನು ನಿರೂಪಿಸುವಾಗ ಕವಿಯು ನಿದರ್ಶನವಾಗಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾನೆ . ಪುಷ್ಟವಿದ್ದರೆ ಸುಗಂಧದ ಅನುಭವ ನಮಗಾಗುತ್ತವೆ . ಪುಷ್ಪವೇ ಇಲ್ಲದಿದ್ದರೆ ಪರಿಮಳವನ್ನು ಅನುಭವಿಸಲು , ಅರಿಯಲು ಹೇಗೆ ನಮಗೆ ಅಸಾಧ್ಯವೋ ಅದರಂತೆಯೇ ಪರಶಿವನಿಂದಾಗಿ ಲಿಂಗವು ಅನುಭವಕ್ಕೆ ಬರುತ್ತದೆಂದು ಕವಿ ಅಭಿಪ್ರಾಯಪಟ್ಟಿರುವನು . ಹೂವು – ಪರಿಮಳಗಳು ಹೇಗೆ ಅಭಿನ್ನವೋ ಪರಶಿವಲಿಂಗಗಳೂ ಭಿನ್ನವಲ್ಲವೆಂಬುದು ಆತನ ಅಭಿಪ್ರಾಯವಾಗಿದೆ .


2nd puc kannada Urilingapeddiya vachanagalu notes pdf

ನಮ್ಮ iamhemanthachar.blogger.com ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ

Comments